ಓ ಮಾಯ ಬಿನ್ನಾಣ!

ಓಡುತಿದೆ ನೋಡಲ್ಲಿ ಎನಗಿಂತ ಮೊದಲಾಗಿ
ಕಣ್ಣಿನೋಟಕೂ ಕಡೆಯಾಗಿ, ಮನದೊಟಕೂ ಮಿಗಿಲಾಗಿ
ಮನಮುಗಿಲ ಒಡಲಿನಾಚೆಗೆ ಹೋಗಿ
ನಿಂತು ನಿಲ್ಲದಲೆ, ಕಂಡು ಕಾಣದ, ಮಿನುಗು ತಾರೆಯಾಗಿ

ಸೌಂದರ್ಯ ಲಾವಣ್ಯ ರೂಪ ಯಾವನವೋ
ಕಂಠಕೋಗಿಲವಾಗಿ, ನವಿಲ ಚಲುವಾಗಿ, ಅಣಿಲು ಕುಣಿತಾಗಿ .
ರುಚಿಯ ರಸವಾಗಿ ಪಕ್ಷ ಚಲುವ ಮಾವೋ
ಇನ್ನು ಎನಿತು ಲೀಲಾ ನಾಟ್ಯ ಬೆಡಗು ಬಿನ್ನಾಣವಾಗಿ

ಉರಿಗೆ ನೆರಳಾಗಿ, ತೃಪೆಗೆ ಪಾನೀಯವಾಗಿ
ಕಾಮ ಬಾಣದ ರತಿಯಾಗಿ ಹರ್ಷವರ್ಷವಾಗಿಹುದು
ಉಬ್ಬಿದಾ ಗೊನೆಯಾಗಿ ಕುಸುಮದೆಸಳಾಗಿ
ಸೊಗಸು ಜಾಲ ಹೆಣೆಗೆ ಉಲ್ಲಾಸ ಉಯ್ಯಾಲೆಯಹುದು

ಕರೆದಿಹುದು ಕೈ ಮಾಡಿ ಓ ಮಾಯ ಬಿನ್ನಾಣ!
ಸರ್ಗಮರೆ ಸರ್ಗವೋ? ಸವಿಯ ಮರೆಯಿಹ ನರಕವೋ ?
ಅರಿಯಲಾರದು ತನುವ ಈ ಮಾಯ ಬಿನ್ನಾಣ
ನೈಜವೋ; ಗರ್ಭ ಒಡಲ ವಿಷವೋ; ತಿಳಿಯದೇನೆಲವೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಸ್ತವತೆ
Next post ಕಾಪಿ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys